ಸಮಾಲೋಚಕರು ಹಾಗೂ ಯುವ ಪರಿವರ್ತಕರ ನೇಮಕಕ್ಕೆ ಅರ್ಜಿ ಅಹ್ವಾನ
ಕೋಲಾರ:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ‘ಯುವ ಸ್ಪಂದನ’ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಯುವ ಸಮಾಲೋಚಕರು ಹಾಗೂ ಯುವ ಪರಿವರ್ತಕರನ್ನು ನೇಮಿಸಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಕೋಲಾರ ಜಿಲ್ಲೆಯವರಾಗಿರಬೇಕು. 16-35 ವರ್ಷ ವಯೋಮಿತಿಯವರಾಗಿರಬೇಕು ಹಾಗೂ ಪದವಿದರರಾಗಿರಬೇಕು. ಆಸಕ್ತ ಯುವಕ/ಯುವತಿಯರು ಅವರ ವೈಯಕ್ತಿಕ ವಿವರಗಳನ್ನೊಳಗೊಂಡ ಬಯೋಡೇಟಾ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಈ ಕಛೇರಿಯಲ್ಲಿ ದಿನಾಂಕ 13-06-2018 ರಂದು ಬೆಳಿಗ್ಗೆ 12.00 ಗಂಟೆಗೆ ಸಂದರ್ಶನಕ್ಕಾಗಿ ಹಾಜರಾಗಲು ಸೂಚಿಸಿದೆ.