ಮುಸ್ಲಿಮರನ್ನು ಪಾಕಿಸ್ಥಾನಕ್ಕೆ ಹೋಗಿ ಎನ್ನಲು ವಿನಯ ಕಟಿಯಾರ್ ಯಾರು?

Source: sonews | By Staff Correspondent | Published on 11th February 2018, 12:01 AM | Coastal News | State News | National News | Don't Miss |

ಭಟ್ಕಳ: ಬಿಜೆಪಿಯ ಸಂಸದ ವಿಯನ ಕಟಿಯಾರ್ ಹೇಳುತ್ತಾರೆ ಈ ದೇಶ ಹಿಂದೂಗಳದ್ದು ಎಂದು. ಆದರೆ ನಾನೂ ಹೇಳುತ್ತೇನೆ ಹಿಂದೂಗಳು ನನ್ನ ಸಹೋದರರು ವಿನಯಾ ಕಟಿಯಾರ್ ಹಿಂದೂವಲ್ಲ. ಹಿಂದೂಗಳು ಹೃದಯಗಳನ್ನು ಬೆಸೆಯುವ ಕೆಲಸ ಮಾಡುತ್ತಾರೆ ಹೊರತು ಅವರು ಹೃದಯಗಳನ್ನು ಒಡೆಯುವವರಲ್ಲ ಎಂದು  ಸಮಾಜಿಕ ಕಾರ್ಯಕರ್ತ ನ್ಯಾಯಾ ಶಿಕ್ಷಣದ ವಿದ್ಯಾರ್ಥಿ ಪಶ್ಚಿಮ ಬಂಗಾಳದ ವಲಿ ರಹಮಾನಿ ಹೇಳಿದರು. 
ಅವರು ಶುಕ್ರವಾರ ರಾತ್ರಿ ನವಾಯತ್ ಕಾಲೋನಿಯ ತಂಝೀಮ್ ಮೈದಾನದಲ್ಲಿ ನಾಗರೀಕ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಆಯೋಜಿಸಿದ್ದ ಕಾನೂನು ಜಾಗೃತಿ ಮತ್ತು ‘ಪ್ರಜಾಪ್ರಭುತ್ವ ರಾಷ್ಟ್ರ ಎದುರಿಸುತ್ತಿರುವ ಆಪಾಯಗಳು, ಅಲ್ಪಸಂಖ್ಯಾತ ಸಮುದಾಯದ ಪಾತ್ರ’ ಎಂಬ ವಿಷಯದ ಕುರಿತು ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ಧೇಶಿಸಿ ಮಾತನಾಡಿದರು. 
1997ರಲ್ಲಿ ಈ ದೇಶ ಇಬ್ಭಾಗಗೊಂಡಿತು 70ವರ್ಷಗಳ ನಂತರ ಮನುಷ್ಯರ ಹೃದಯಗಳನ್ನು ಒಡೆಯಲಾಗುತ್ತಿದೆ. ಈ ದೇಶದ ಹಿಂದುಗಳದ್ದಾಗಿದೆ. ಮುಸ್ಲಿಮರು ಪಾಕಿಸ್ಥಾನಕ್ಕೆ ಹೋಗಬೇಕು ಎಂದು ಹೇಳಲಾಗುತ್ತಿದೆ. 70 ವರ್ಷಗಳ ನಂತರವೂ ನಮ್ಮಿಂದ ದೇಶ ಪ್ರೇಮದ ಪ್ರಮಾಣಪತ್ರವನ್ನು ಕೇಳಲಾಗುತ್ತಿರುವುದು ಕಂಡರೆ ನಾವು ಎತ್ತ ಸಾಗುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತಿದೆ. ದೇಶದ ಸರಹದ್ದಿನಲ್ಲಿ ಈಗಲು ಜೀವಕೊಡುವ ಪ್ರಸಂಗ ಬಂದರೆ ನಮ್ಮ ಮಕ್ಕಳಿಗೆ ಮರಣಬಟ್ಟೆಯನ್ನು ತೊಡೆಸಿ ಸರಹದ್ದಿಗೆ ಕಳುಹಿಸಲೂ ನಾವು ಸದಾ ಸಿದ್ಧರಿದ್ದೇವೆ. ದೇಶ ಇಬ್ಭಾಗದ ಸಮಯದಲ್ಲಿ ಮೌಲಾನ ಆಝಾದ್ ರು, ಓ ಸಹೋದರರೇ ನಿಮ್ಮ ದೇಶಬಿಟ್ಟು ಎಲ್ಲಿಗೆ ಹೋಗುತ್ತಿದ್ದೀರಿ, ನಿಮ್ಮ ಪೂರ್ವಜರ ನಾಡು ನಿಮ್ಮನ್ನು ತಡೆಯುತ್ತಿದÉ’ ಎಂದು ಕೂಗಿ ಕೂಗಿ ಕರೆದಿದ್ದನ್ನು ಸ್ಮರಿಸಿದ ಅವರು, ಇಂದು ನಮ್ಮ ನಡುವೆ ದ್ವೇಷದ ಮುಳ್ಳುಗಳನ್ನು ಹರಡುತ್ತಿರುವವರೇ, ನಾಳೆ ನಿಮ್ಮ ಮಕ್ಕಳೂ ಕೂಡ ಇದೇ ಹಾದಿಯಲ್ಲಿ ಹಾದುಹೋಗಬೇಕಾಗಿದೆ, ನಮ್ಮ ಮಕ್ಕಳ ಕಾಲುಗಳು ಗಾಯಗೊಳ್ಳುತ್ತವೆ ಆದರೆ ನಿಮ್ಮ ಮಕ್ಕಳ ಕಾಲುಗಳು ನೀವೇ ಹಾಸಿದ ಮುಳ್ಳು ಹಾಸಿಗೆಯಿಂದ ಗಾಯಗೊಳ್ಳುವಂತಾಗಬಾರದು ದಯಮಾಡಿ ಹಿಂದೂ-ಮುಸ್ಲಿಮರ ಮದ್ಯೆ ದ್ವೇಷದ ವಿಷ ಮುಳ್ಳುಗಳನ್ನು ಹಾಸನ್ನು ಹಾಸಬೇಡಿ ಎಂದು  ಅವರು ಮನವಿ ಮಾಡಿಕೊಂಡರು. ನಮ್ಮ ಪೂರ್ವಜರು ಈ ದೇಶದ ಹಿಂದೂ, ಮುಸ್ಲಿಮ್, ಸಿಖ್ ಮತ್ತಿತರರು ಸೇರಿ ಒಂದು ಸಂವಿಧಾನ ರಚಿಸಿದ್ದು ನಾವೆಲ್ಲರೂ ಇದೇ ಮಣ್ಣಿನ ಭಾಗವಾಗಿದ್ದೇವೆ. ಇಲ್ಲೆ ಹುಟ್ಟಿದ್ದೇವೆ ಇಲ್ಲೇ ಸಾಯಲಿಕ್ಕಿದೆ ಒಂದು ದೇಶ ಒಂದು ಸೇನೆ ಅದು ಭಾರತದ ಸೇನೆ. ಆದರೆ ಇತ್ತಿಚೆಗೆ ಕೆಲವು ಸಮಾಜಘಾತುಕ ಸೇನೆಗಳು ಹುಟ್ಟಿಕೊಂಡಿದ್ದು ದೇಶದ ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿವೆ ಎಂದ ಅವರು ಈ ದೇಶದಲ್ಲಿ ಕರ್ಣಿಸೇನಾ, ಆರ್.ಎಸ್.ಎಸ್.ಸೇನಾ, ಇಂಡಿಯನ್ ಮುಜಾಹಿದ್ದೀನ್ ಸೇನೆಗಳ ಅವಶ್ಯಕತೆಯಿಲ್ಲ ನಮಗೊಂದೇ ಅದು ಭಾರತೀಯ ಸೇನಾ ಇದರ ಅವಶ್ಯಕತೆ ನಮಗಿದೆ ಎಂದರು. 2015ರಲ್ಲಿ ನನ್ನ ವಯಸ್ಸು 15 ಇತ್ತು. ಆಗ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ನಾನು ಹೇಳಿದೆ ನನ್ನ ದೇಶ ನನ್ನ ಸಂವಿಧಾನ ಅಪಾಯದಲ್ಲಿ ಎಂದು. ಆಗ ನನಗೆ ನೀನಿನ್ನು ಬಚ್ಚಾ ನಿನಗಿದು ಅರ್ಥವಾಗದು ಎಂದರು. ನಂತರ ಈಗ ಈ ಭಾಗದ ಸಂಸದರೊಬ್ಬರು ದೇಶದ ಸಂವಿಧಾನ ಬದಲಿಸುತ್ತೇನೆ ಎನ್ನುತ್ತಾರೆ, ಸುಪ್ರಿಂ ಕೋರ್ಟ್‍ನ ನಾಲ್ವರು ಹಿರಿಯ ನ್ಯಾಯವಾದಿಗಳು ದೇಶದ ನ್ಯಾಯಾ ವ್ಯವಸ್ಥೆ ಅಪಾಯದಲ್ಲಿದೆ ಎಂದಾಗಲೂ ನನ್ನ ದೇಶ, ನನ್ನ ಸಂವಿಧಾನ ಅಪಾಯದಲ್ಲಿದೆ ಎಂದು ನಿಮಗನ್ನಿಸುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಪ್ರಜಾಭುತ್ವ ಅಪಾಯದಲ್ಲಿದೆ. ದೇಶದ ಸಂವಿಧಾನ ಅಪಾಯದಲ್ಲಿದೆ ಇನ್ನು ನಾವು ಎಚ್ಚರಗೊಳ್ಳದಿದ್ದರೆ ಈ ದೇಶ ಗೂಂಡಾಗಳ, ರೌಡಿಗಳ ಪಾಲಾಗುತ್ತದೆ ಆದ್ದರಿಂದ ದೇಶಬಾಂಧವರೆ ನಿದ್ದೆಯಿಂದ ಎಚ್ಚರಗೊಳ್ಳಿ ಎಚ್ಚರಗೊಳ್ಳುವುದರಲ್ಲೇ ದೇಶದ ಹಿತ ಅಡಗಿದೆ ಎಂದು ಕರೆ ನೀಡಿದರು. 
ಬೆಂಗಳೂರು ಹೈಕೋರ್ಟ್ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ಬಿ.ಟಿ.ವೆಂಕಟೇಶ್ ನಾಯಕ ಮಾತನಾಡಿ,  ಇಂದು ದೇಶದ ಸ್ಥಿತಿ ಗಂಭೀರವಾಗಿದೆ, ಭಯ, ಆತಂಕದ ಸ್ಥಿತಿಯಲ್ಲಿ ಬದುಕುವಂತಾಗಿದೆ ನಾವು ಎತ್ತಸಾಗುತ್ತಿದ್ದೇವೆ ಎನ್ನುವುದೇ ತಿಳಿಯದಾಗಿದೆ. ಪ್ರಶ್ನಿಸುವವರ ದ್ವನಿಯಡಗಿಸುವ ಪ್ರಯತ್ನ ನಡೆದಿದೆ.  ಬೆದರಿಕೆ, ಅಪಾಯಗಳನ್ನು ಎದುರಿಸಿದ ಗೌರಿ, ಪ್ರಶ್ನಿಸುವುದರನ್ನು ಬಿಡಲಿಲ್ಲ. ಆದ್ದರಿಂದ ಆಕೆಯ ದ್ವನಿ ಅಡಗಿಸಿ ಬಿಟ್ಟರು. ನಾವು ಪ್ರಶ್ನಿಸುವುದನ್ನು ಬಿಡಬಾರದು ನಾವು ಸುಮ್ಮನಿದ್ದೇವೆ ಅದಕ್ಕಾಗಿಯೇ ನಮ್ಮನ್ನು ಭಯ ಆವರಿಸಿದೆ ಎಂದ ಅವರು, ಈಗ ದೇಶದಲ್ಲಿ ಯುವಕರು ಪ್ರಶ್ನೆ ಮಾಡುವುದನ್ನು ಕಲಿತುಕೊಂಡಿದ್ದಾರೆ, ಕನ್ನಯ್ಯ, ಮೇವಾನಿ, ರಹ್ಮಾನಿಯಂತಹ ಯುವಕರು ಈಗ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ ಇದು ಒಳ್ಳೆಯ ಬೆಳವಣೆಗೆ ಎಂದರು. ನಮ್ಮ ಹಕ್ಕುಗಳಿಗಾಗಿ ನಾವು ಪ್ರಶ್ನಿಸಬೇಕು ಈ ಕೆಲಸ ಯುವ ಸಮುದಾಯದಿಂದಲೇ ಆಗಬೇಕು ಎಂದರು. 
ಈ ಸಂದರ್ಭದಲ್ಲಿ ತಾನು ಮಾಡದ ತಪ್ಪಿಗೆ ಕಳೆದ 8ವರ್ಷಗಳನ್ನು ಜೈಲಿನಲ್ಲಿ ಕಳೆದ ನಂತರ ನಿರಾಪರಾಧಿ ಎಂದು ಸಾಬಿತಾಗಿ ಬಿಡುಗಡೆಗೊಂಡ ಮೌಲಾನ ಶಬ್ಬಿರ್ ಗಂಗೋಳ್ಳಿ  ಅಲ್ಲಿ  ತಾನು ಅನುಭವಿಸಿದ ಚಿತ್ರಹಿಂಸೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.  
ನಾಗರೀಕ ಹಕ್ಕು ಸಂರಕ್ಷಣ ಸಂಸ್ಥೆಯ ಜಿಲ್ಲಾಧ್ಯಕ್ಷ ಮೌಲಾನ ಎಸ್.ಎಂ.ಸೈಯ್ಯದ್ ಝುಬೈರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಮಷಾಯಿಖ್ ವರದಿ ವಾಚಿಸಿ ಎಲ್ಲರನ್ನೂ ಸ್ವಾಗತಿಸಿದರು. ಇಸ್ಮಾಯಿಲ್ ಝವರೇಝ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. 
ವೇದಿಕೆಯಲ್ಲಿ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ಉಪ ಖಾಝಿ ಮೌಲಾನ ಅಬ್ದುಲ ಅಝೀಮ್ ಕಾಜಿಯಾ, ಮೌಲಾನ ಜಾಫರ್ ನದ್ವಿ ಫಕ್ಕಿಭಾವ್ ನದ್ವಿ, ನಾರ್ತ್ ಕೆನಾರ ಮುಸ್ಲಿಮ್ ಯುನೈಟೆಡ್ ಫೋರಂ ಪ್ರಧಾನ ಕಾರ್ಯದರ್ಶಿ ಮೊಹಸಿನ್ ಖಾಝಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖಾಧ್ಯಕ್ಷ ಮುಜಾಹಿದ್ ಮುಸ್ತಫಾ, ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್, ಇಸ್ಲಾಮಿಕ್ ವೆಲ್ಫೇರ್ ಸೂಸೈಟಿಯ ಸೈಯ್ಯದ್ ಶಕೀಲ್ ಎಸ್‍ಎಮ್, ತಂಝೀಮ್ ಮುಖಂಡ ಇನಾಯತುಲ್ಲಾ ಶಾಬಂದ್ರಿ, ನವಾಯತ್ ಮಹೆಫಿಲ್ ನ ಜಾನ್ ಅಬ್ದುಲ್ ರಹ್ಮಾನ್ ಮೊಹತಿಶಮ್, ಡಾ. ಮುಹಮ್ಮದ್ ಹನಿಫ್ ಶಬಾಬ್ ಮತ್ತಿತರರು ಉಪಸ್ಥಿತರಿದ್ದರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...