ಭಟ್ಕಳ: ಡಾ.ಸೈಯ್ಯದ್ ಖಲೀಲುರ್ರಹ್ಮಾನ್ ಗೆ ಸನ್ಮಾನ
ಭಟ್ಕಳ: ಇತ್ತಿಚೆಗೆ ದುಬೈಯಲ್ಲಿ ಐರ್ಲೆಂಡ್ ಸರ್ಕಾರ ಭಟ್ಕಳದ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಮಾಜಿ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಖಲೀಲುರ್ರಹ್ಮಾನ್ ರಿಗೆ ಡಾಕ್ಟರೇಟ್ ಪದವಿ ನೀಡಿದ್ದು ಇದಕ್ಕಾಗಿ ಶುಕ್ರವಾರ ಕುಮಟಾ ಅಲ್ ಎಹ್ಸಾನ್ ವೆಲ್ಫೆರ್ ಟ್ರಸ್ಟ್ ವತಿಯಿಂದ ಅವರ ಸ್ವಗ್ರಹದಲ್ಲಿ ಸನ್ಮಾಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಸ್.ಎಂ. ಸೈಯ್ಯದ್ ಖಲೀಲ್, ಪ್ರಶಸ್ತಿ ಗೌರವಗಳು ಮನುಷ್ಯನ ಒಳ್ಳೆಯತನಕ್ಕೆ ನೀಡಲಾಗುತ್ತವೆ. ನಾವು ಮಾಡಿದ ಒಳ್ಳೆಯ ಕಾರ್ಯಗಳು ನಮ್ಮ ಸೃಷ್ಟಿಕರ್ತನಿಗೆ, ಭಗವಂತನಿಗೆ ತೃಪ್ತಿಕೊಟ್ಟಿದ್ದಲ್ಲಿ ಇದಕ್ಕಿಂತಲೂ ಉನ್ನತ ಗೌರವಾದಾರಗಳು ನಮಗೆ ಸಿಗಲಿವೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಬಸ್ತಿ ಅಬ್ದುಲ್ ಮಲೀಕ್, ಉಪಾಧ್ಯಕ್ಷ ಮೌಲಾನ ಮುಹಮ್ಮದ್ ಹುಸೇನ್ ಗೈಮಾ, ಪ್ರಧಾನ ಕಾರ್ಯದರ್ಶಿ ಮುಝಪ್ಪರ್ ಶೇಖ್ ಹಾಗೂ ಖಜಾಂಚಿ ಕಾದಿರ್ ಮೀರಾ ಪಟೇಲ್ ಉಪಸ್ಥಿತಿದ್ದರು.