ಜೂನ್ 18ರಿಂದ ಕೃಷಿ ಅಭಿಯಾನ
ಕಾರವಾರ: ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿತಂತ್ರಜ್ಞಾನವನ್ನುರೈತರಿಗೆತಲುಪಿಸಲು ಏಕ ಗವಾಕ್ಷಿ ವಿಸ್ತರಣಾ ಪದ್ಧತೆಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ವಿವಿಧಅಭಿವೃದ್ದಿ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿಕಾರ್ಯಕ್ರಮವಾಗಿ ದಿನಾಂಕ 18-06-2018ರಿಂದ 29-06-2018ರವರೆಗೆ ಕೃಷಿ ಅಭಿಯಾನ 2018 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಲಾಖೆ ನಡಿಗೆರೈತರ ಬಾಗಿಲಿಗೆ ಶೀರ್ಷಿಕೆಯಡಿ ಕೃಷಿ ಅಭಿಯಾನಕಾರ್ಯಕ್ರಮ ಹೋಬಳಿ ಮಟ್ಟದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗುವುದು. ಪ್ರತಿ ಹೋಬಳಿಯಲ್ಲಿ ಗ್ರಾಮ ಪಂಚಾಯ್ತಿವಾರುಕಾರ್ಯತಂಡವನ್ನು ರಚಿಸಿಕೊಂಡು ಆಯಾ ಪಂಚಾಯ್ತಿಗೆ ಸಿದ್ಧಪಡಿಸಿದ ವೇಳಾಪಟ್ಟಿಯಂತೆ ಎಲ್ಲಾಗ್ರಾಮ ಪಂಚಾಯ್ತಿಗಳು ಒಳಗೊಂಡಂತೆ ಎರಡು ದಿನಗಳ ಕಾಲ ತೀವ್ರ ಪ್ರಚಾರ ಕೈಗೊಳ್ಳಲಾಗುವುದು.
ಮೂರನೇ ದಿನ ಹೋಬಳಿ ಕೇಂದ್ರಸ್ಥಾದಲ್ಲಿ ಕೃಷಿ ವಸ್ತು ಪ್ರದರ್ಶನ, ರೈತರ ಸಂವಾದ, ಕೃಷಿ ಸಂಬಂಧಿಸಿದ ಇಲಾಖೆಗಳಾದ ಪಶು ಸಂಗೋಪನೆ, ತೋಟಗಾರಿಕೆ, ಮೀನುಗರಿಕೆ, ಇತರೆ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ಇದರ ಪ್ರಯೋಜನವನ್ನುಎಲ್ಲರೈತರೂ ಸದ್ಬಳಕೆ ಮಾಡಿಕೊಳ್ಳುವಂತೆ ಕಾರವಾರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.