ಅಬುಧಾಬಿ: ಫೆಬ್ರವರಿ 24 ರಂದು ಅಬು ಧಾಬಿ ಯಲ್ಲಿ ಕನ್ನಡಿಗರ ಕ್ರಿಕೆಟ್ ಮೇಳ.-ಮಂಗಳೂರು ಕಪ್ – 2017

Source: Yahya abbas | By Arshad Koppa | Published on 16th February 2017, 9:30 PM | Gulf News | Sports News |

ಅಬುಧಾಬಿ, ಫೆ೧೬ : ವರ್ಷಂಪ್ರತಿ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿರುವ ಮಂಗಳೂರು ಕಪ್ ನ ಐದನೇ ಸೀಸನ್ “ಮಂಗಳೂರು ಕಪ್ 2017” ಫೆಬ್ರವರಿ  24 ಶುಕ್ರವಾರ ಶೇಖ್ ಝಾಯಿದ್ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆಯೆಂದು ಮಂಗಳೂರು ಕ್ರಿಕೆಟ್ ಕ್ಲಬ್ ಅಬುಧಾಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ನಾಲ್ಕು ಸೀಸನ್ ಗಳಲ್ಲಿ ಶೇಖ್ ಝಾಯಿದ್ ಓವೆಲ್ ಕ್ರೀಡಾಂಗಣದಲ್ಲಿ  ಪಂದ್ಯಾಟ ನಡೆದುಬಂದಿದ್ದು. ಈ ಬಾರಿ  ಶೇಖ್ ಝಾಯಿದ್ ಅಂತಾರಾಷ್ಟ್ರೀಯ ಸರಣಿ ನಡೆಯುವ ಮುಖ್ಯ ಮೈದಾನದಲ್ಲಿ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿರುವುದು ಸಂಘಟಕರು ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಇನ್ನಷ್ಟು ಹುಮ್ಮಸ್ಸನ್ನು ನೀಡಲಿದೆ.

 

ಪಂದ್ಯಾಟದ ನೇರ ಪ್ರಸಾರ, ವೀಕ್ಷಕರಿಗಾಗಿ ಹತ್ತು ಹಲವು ಆಟಗಳು, ಲಕ್ಕಿಡ್ರಾ, ಯೂನಿವರ್ಸಲ್ ಹಾಸ್ಪಿಟಲ್ ವತಿಯಿಂದ ಉಚಿತ ಅರೋಗ್ಯ ತಪಾಸಣೆ, ಯುನಿಲಿವೆರ್ ನ  ಪ್ರಾಡಕ್ಟ್ ಗಳ  ಉಚಿತ ವಿತರಣೆ, ಊಟದ ವ್ಯವಸ್ಥೆ ಇರುವುದರಿಂದ ಐದು ಸಾವಿರಕ್ಕೂ ಮಿಕ್ಕ ವೀಕ್ಷಕರನ್ನು ಹೊಂದುವ ನೀರಿಕ್ಷೆಯನ್ನು ಸಂಘಟಕರು ವ್ಯಕ್ತ ಪಡಿಸಿದ್ದಾರೆ.

ಪೈಪೋಟಿಯುತ ಹಣಾಹಣಿ ನಿರೀಕ್ಷಿತ ಪಂದ್ಯಾವಳಿಯಲ್ಲಿ  ಹಾರ್ಡ್ ಟೆನಿಸ್ – MRI ಚೆಂಡು ಬಳಕೆಯಾಗಲಿದ್ದು, ಪಂದ್ಯ ವು ನಿರ್ದಿಷ್ಟ ಆರು ಓವರ್ ಗಳಿಗೆ ಸೀಮಿತವಾಗಿದೆ. ಪ್ರವಾಸಿ ಭಾರತೀಯ ತಂಡಗಳಿಗೆ ಮಾತ್ರ ಸೀಮಿತವಾಗಿರುವ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಕೇವಲ ಭಾರತೀಯ ಕ್ರಿಕೆಟಿಗರನ್ನು ಮಾತ್ರ  ಹೊಂದಿರಬೇಕೆಂಬ ನಿಬಂಧನೆ ಇರುವುದಾಗಿ ಸಂಘಟಕರು  ವ್ಯಕ್ತಪಡಿಸಿದ್ದಾರೆ.

ಈ ಸಂಧರ್ಭದಲ್ಲಿ ಮಂಗಳೂರು ಕಪ್ – ಮೈಲಿಗಲ್ಲುಗಳು ಎಂಬ ಕಿರುಹೊತ್ತಿಗೆಯನ್ನೂ ಸಂಘಟಕರು ಪ್ರಕಾಶನ ಮಾಡಲಿದ್ದಾರೆ. ಕಳೆದ ಬಾರಿ 28 ತಂಡಗಳು ಯುಎಇ ಸಂಯುಕ್ತ ಅರಬ್ ಸಂಸ್ಥಾನದ ಏಳು ಎಮಿರೇಟ್ ಗಳಿಂದ ಆಗಮಿಸಿ ಕದನ ಕುತೂಹಲ ಕೆರಳಿಸಿತ್ತು. 2013 ಫೈನಲ್ ಹಣಾಹಣಿಯಲ್ಲಿ ಸುರತ್ಕಲ್ ಸ್ಟಾರ್ ಟ್ರೋಫಿಯನ್ನು ತನ್ನ ಬಗಲಿಗೆ ಹಾಕಿಕೊಂಡರೆ ನಫೀಸ್ ದುಬೈ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.  2014 ರ ಫೈನಲ್ ನಲ್ಲಿ  ಯಂಗ್ ಇಂಡಿಯನ್ಸ್ ಮತ್ತು ಸಿತಾರ ಕ್ರಿಕೆಟರ್ಸ್ ತಂಡಗಳು ಕ್ರಮವಾಗಿ ವಿನ್ನರ್ ಮತ್ತು ರನ್ನರ್ ಅಪ್ ಆಗಿತ್ತು. 2015 ರ ಜಿದ್ದಾಜಿದ್ದಿನ ಹೋರಾಟದಲ್ಲಿ ಸುರತ್ಕಲ್ ಸ್ಟಾರ್ಸ್ ವಿಜಯ ದುಂದುಭಿ ಮೊಳಗಿಸಿದರೆ ಆಕ್ಸ್ಫರ್ಡ್ ಮರೀನ್ ತಂಡ ರನ್ನರ್ ಅಪ್ ಆಗಿ ಮೂಡಿಬಂದಿತ್ತು. 2016 ರ ರೋಚಕ ಫೈನಲ್ ನಲ್ಲಿ ಫ್ರೈಡೆ ಚಾರ್ಜರ್ಸ್ ತಂಡ ಮತ್ತು ಆಕ್ಸ್ಫರ್ಡ್ ಮರೀನ್ ತಂಡಗಳು ಕ್ರಮವಾಗಿ ವಿನ್ನರ್ ಮತ್ತು ರನ್ನರ್ ಅಪ್ ಆಗಿ ಜಯಭೇರಿ ಬಾರಿಸಿತ್ತು.

 

ಪಂದ್ಯಾವಳಿಯ ವಿಜಯಿಗಳಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿದ್ದು ಅವು ಇಂತಿವೆ :

 

ಪ್ರಥಮ ಸ್ಥಾನ –  ಟ್ರೋಫಿ ಮತ್ತು 12222/ -AED ಮೊತ್ತ

ರನ್ನರ್ ಅಪ್ – ಟ್ರೋಫಿ ಮತ್ತು 6222/ -AED ಮೊತ್ತ

 

ಸರಣಿ ಪುರುಷೋತ್ತಮ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಕೀಪರ್, ಉತ್ತಮ ಕ್ಷೇತ ರಕ್ಷಕ, ಮನಮೋಹಕ ಕ್ಯಾಚ್ ಹಾಗು ಫೈನಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪ್ರದಾನಮಾಡಲಾಗುವುದು. ಲೀಗ್ ಹಂತದ ಪ್ರತೀ ಪಂದ್ಯಗಳಲ್ಲಿ ಕೂಡ ಪಂದ್ಯ ಪುರುಷೋತ್ತಮ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ವೀಕ್ಷಕರಿಗೆ ಮತ್ತು ಆಟಗಾರರಿಗೆ ಹತ್ತು ಹಲವು ಆಕರ್ಷಕ ಬಹುಮಾನಗಳನ್ನೂ ಪಡೆಯುವ ಸದಾವಕಾಶವಿದೆ. ಈ ಪಂದ್ಯಾವಳಿಯ ಉಧ್ಘಾಟನಾ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದ ಗಣ್ಯರು, ಉದ್ಯಮಿಗಳು ಭಾಗವಹಿಸಲಿದ್ದಾರೆ.

ಅನಿವಾಸಿ ಕನ್ನಡಿಗರಲ್ಲಿ ಕ್ರೀಡಾಪ್ರೇಮವನ್ನು ಹುರಿದುಂಬಿಸುವ ಸಲುವಾಗಿ ಹುಟ್ಟಿಕೊಂಡ ಮಂಗಳೂರು ಕ್ರಿಕೆಟ್ ಕ್ಲಬ್ ವರ್ಷಂಪ್ರತಿ ಈ ಪಂದ್ಯಾವಳಿಯನ್ನು ನಡೆಸಿಕೊಂಡು ಹೋಗುವ ಗುರಿ ಹೊಂದಿದೆ. ತಂಡಗಳ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು. ಭಾಗವಹಿಸಲಿಚ್ಚಿಸುವವರು ಅಂತರ್ಜಾಲದ ಮುಖಾಂತರ ಮಂಗಳೂರು ಕ್ರಿಕೆಟ್ ಕ್ಲಬ್ ವೆಬ್ಸೈಟ್ http://www.mccabudhabi.com ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿ ಎಂಸಿಸಿ ಅಧ್ಯಕ್ಷ  ಕೆ. ಹೆಚ್ ಲತೀಫ್ ಕಕ್ಕಿಂಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸಬೇಕಾಗಿ ಕೋರಲಾಗಿದೆ, ಲತೀಫ್ – 0506713247

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್