ಸುರಕ್ಷಿತವಾಗಿ ದುಬೈ ತಲುಪಿದ ಉತ್ತರಕನ್ನಡ ಜಿಲ್ಲೆಯ ೧೮ಮೀನುಗಾರರು

Source: sonews | By Staff Correspondent | Published on 10th January 2019, 12:10 AM | Coastal News | National News | Gulf News | Don't Miss |

•    ತಾಯ್ನಾಡಿಗೆ ಮರಳುವ ತವಕ
 

ಭಟ್ಕಳ: ಅಕ್ರಮ ಗಡಿ ಪ್ರವೇಶದ ಆರೋಪದಡಿ  ಕಳೆದ 8 ತಿಂಗಳ ಹಿಂದೆ ಇರಾನ್ ಸರ್ಕಾರದಿಂದ ಬಂಧಿಸಲ್ಪಟ್ಟು ಅಲ್ಲಿ ಗೃಹಬಂಧನ ಎದುರಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರು ಸೇರಿದಂತೆ ಭಾರತದ ಒಟ್ಟು 28 ಮೀನುಗಾರರು ಸುರಕ್ಷಿತವಾಗಿ ಬುಧವಾರ ರಾತ್ರಿ ಬೋಟ್ ಮೂಲಕ ದುಬೈನ ಜುಮೈರಾ ಬಂದರ್ ತಲುಪಿದರು.(ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ) ತಲುಪಿದ್ದಾಗಿ ಮೀನುಗಾರರ ಕುಟುಂಬದವರು ದೃಢಪಡಿಸಿದ್ದು ದುಬೈಯಿಂದ ಫೋಟೊ ಮತ್ತು ವಿಡಿಯೋ ಬಿಡುಗಡೆಗೊಳಿಸಿದ್ದಾರೆ. 
 

ಜುಲೈ 27ರಂದು 28 ಮೀನುಗಾರರು ದುಬೈ ಮೂಲಕ ಮೀನುಗಾರಿಕೆಗೆ ತೆರಳಿದ್ದು ಇರಾನ್ ನೇವಿ ಆಧಿಕಾರಿಗಳು ಅಕ್ರಮ ಗಡಿ ಪ್ರವೇಶದ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ಬೋಟುಗಳನ್ನು ವಶಕ್ಕೆ ಪಡೆದುಕೊಂಡು ಅದರಲ್ಲಿದ್ದ ಮೀನುಗಾರರನ್ನು ಗೃಹಬಂಧದಲ್ಲಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.  ದುಬೈ ಕರ್ನಾಕ ಎನ್.ಅರ್.ಐ ಫೋರಂ ನ ಪ್ರಯತ್ನದಿಂದಾಗಿ ಮಂಗಳವಾರ ಬಿಡುಗಡೆಗೊಂಡಿದ್ದ ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರು ಸೇರಿಂದತೆ ಮಹಾರಾಷ್ಟ್ರ ರತ್ನಗಿರಿ ಜಿಲ್ಲೆಯ 5 ಹಾಗೂ 5ಜನ ಬೋಟ ಮಾಲಿಕರು ಸೇರಿದಂತೆ ಒಟ್ಟು 28ಮಂದಿ  ಈಗ ಸುರಕ್ಷಿತವಾಗಿ ದುಬೈ ತಲುಪಿದ್ದಾರೆ. 
ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರ ವಿವರ: ಭಟ್ಕಳದ ನಿವಾಸಿಗಳಾದ ಮುಹಮ್ಮದ ಷರೀಫ್, ಉಸ್ಮಾನ್ ಬೊಂಬಾಯಿಕರ್, ಅಬ್ದುಲ್ಲಾ ಡಾಂಗಿ, ಅತೀಖುರ್ರಹ್ಮಾನ್ ಘಾರೊ, ಜಾಫರ್ ತಡಲಿಕರ್, ಖಲೀಲ್ ಪಾನಿ ಬುಡ್ಡೋ, ನಯೀಂ ಭಂಡಿ, ಇಬ್ರಹೀಮ್ ಮುಲ್ಲಾ, ಎಂ.ಅನ್ಸಾರ್ ಬಾಬು. ಕುಮಟಾ ತಾಲೂಕಿನ ಯಾಖೂಬ್ ಷಮಾಲಿ, ಇಲ್ಯಾಸ್ ಅಂಬಾಡಿ, ಇನಾಯತ್ ಷಮಾಲಿ, ಇಲ್ಯಾಸ್ ಘಾರೋ, ಅಜ್ಮಲ್ ಷಮಾಲಿ, ಇಬ್ರಾಹೀಂ ಹೂಡೆಕರ್, ಹೊನ್ನಾವರ ತಾಲೂಕಿನ ಮಂಕಿಯ ಮತ್ಲೂಬ್ ಸಾರಂಗ್, ಅಂಕೋಲಾ ತಾಲೂಕಿನ ಖಾಸೀಮ್ ಶೇಖ್ ಮತ್ತು ಶಿರೂರಿನ ಅಬ್ದುಲ್ ಹುಸೇನ್ ಸೇರಿದ್ದಾರೆ.
ಬುಧವಾರ ರಾತ್ರಿ ದುಬೈನ ಜುಮೈರಾ ಬಂದರ್ ತಲುಪಿದ ಇವರನ್ನು ಅವರ ಸಂಬಂಧಿಕರು, ಸ್ನೆಹಿತರು ಹಿತೈಷಿಗಳು ಸಂತೋಷದಿಂದ ಬರಮಾಡಿಕೊಂಡು ಅವರನ್ನು ತಬ್ಬಿಕೊಂಡು ಸಂತೋಷಪಟ್ಟರು. 

 

ತಾಯ್ನಾಡಿಗೆ ಮರಳುವ ತವಕ:

ದುಬೈಯಿಂದ ದೂರವಾಣಿಯಲ್ಲಿ ಮಾತನಾಡಿದ ಉಸ್ಮಾನ್ ಬೊಂಬಾಯಿಕರ್ ತನ್ನ ತಾಯ್ನಾಡಿಗೆ ಆದಷ್ಟು ಬೇಗ ಮರಳುವ ತವಕವನ್ನು ವ್ಯಕ್ತಪಡಿಸಿದ್ದು ಮನೆಯಲ್ಲಿ ತಾಯಿ ಹಾಗೂ ಸಹೋದರರನ್ನು ಕಾಣಬೇಕೆಂದು ಬಹುದಿನಗಳ ಕನಸು ಈಗ ನನಸಾಗುತ್ತಿದೆ. ನಮ್ಮೆಲ್ಲರನ್ನು ಸುರಕ್ಷಿತವಾಗಿ ಮರಳುವಂತೆ ಮಾಡಿದ ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದರು. 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...