ಪ್ರೀತಿ ನಿರಾಕರಿಸಿದಕ್ಕೆ ಪೋಷಕರೆದುರೇ ಯುವತಿಗೆ ಚಾಕುವಿನಿಂದ ಇರಿದ

Source: S O News | By MV Bhatkal | Published on 26th December 2016, 2:28 PM | Don't Miss | National News |

ಮುಂಬೈ:ಇಲ್ಲಿನ ಮೀರಾಪುರ್ ರೋಡ್ ನಿವಾಸಿಯಾದ ಮನೀಷ್ ಗುಪ್ತಾ ಈ ಕೃತ್ಯವೆಸಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚಾಕು ಇರಿತಕ್ಕೊಳಗಾದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮೀರಾ ರೋಡ್‍ನ ನ್ಯೂ ಗೋಲ್ಡನ್ ನೆಸ್ಟ್‍ನಲ್ಲಿ ಮನೀಷ್ ವಾಸವಿದ್ದ. ಈತನ ಪಕ್ಕದಮನೆಯಲ್ಲಿ ಯುವತಿಯ ಸಂಬಂಧಿಕರಿದ್ದ ಕಾರಣ ಆಕೆ ಅಲ್ಲಿಗೆ ಬಂದುಹೋಗುತ್ತಿದ್ದಾಗ ಮನಿಷ್‍ನ ಪರಿಚಯವಾಗಿ ಸ್ನೇಹ ಬೆಳೆದಿತ್ತು. ನಂತರ ಮನೀಷ್ ಆಕೆಯನ್ನು ಪ್ರೇಮಿಸಲು ಶುರು ಮಾಡಿದ್ದ. ಆಕೆ ಕೂಡ ತನ್ನನ್ನು ಇಷ್ಟಪಡುತ್ತಿದ್ದಾಳೆಂದು ಭಾವಿಸಿದ್ದ. ಮನೀಷ್ ತನ್ನ ಪ್ರೀತಿಯನ್ನು ಯುವತಿಯ ಬಳಿ ಹೇಳಿಕೊಂಡಾಗ ಆಕೆ ನಾವು ಕೇವಲ ಫ್ರೆಂಡ್ಸ್ ಅಷ್ಟೆ ಎಂದು ಹೇಳಿ ಪ್ರೀತಿಯನ್ನು ನಿರಾಕರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರೆದುರೇ ಇರಿದ: ಯುವತಿ ಮನೀಷ್‍ನ ಪ್ರೀತಿಯನ್ನ ಸಾಕಷ್ಟು ಬಾರಿ ನಿರಾಕರಿಸಿದ್ದಳು. ಆತನ ಕಿರುಕುಳ ಹೆಚ್ಚಾದಾಗ ತನ್ನ ಮನೆಯಲ್ಲಿ ವಿಷಯ ತಿಳಿಸಿದ್ದಳು. ಇದೇ ಕಾರಣಕ್ಕೆ ಯುವತಿಯ ಪೋಷಕರು ಮನೀಷ್‍ಗೆ ಬುದ್ಧಿ ಹೇಳಲು ಆತನ ಮನೆಗೆ ಬಂದಿದ್ದರು. ಈ ವೇಳೆ ಆತ ಯುವತಿಯೊಂದಿಗೆ ಪ್ರತ್ಯೇಕವಾಗಿ ಮಾತನಾಡಬೇಕು ಎಂದಿದ್ದ. ಹೀಗಾಗಿ ಯುವತಿಯ ಪೋಷಕರು ಬೇರೊಂದು ರೂಮಿನಲ್ಲಿದ್ದ ವೇಳೆ ಆತ ಕೋಪಗೊಂಡು ಆಕೆಯ ತಲೆ, ಕೈ ಹಾಗೂ ಎದೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪತಂಜಲಿಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ; ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಪತಂಜಲಿಗೆ ಸುಪ್ರೀಂ ಕೋರ್ಟ್ ಚಾಟಿ

ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸುವ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ...